Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಮೇ 8, 2011
ಪ್ರೆಮೋದಯ

ನಿನ್ನ ಹೆಸರ ತುದಿಗೆ ನನ್ನ ಹೆಸರ ಸೇರಿಸುವಾಸೆ
ತಪ್ಪಿಯಾದರೂ ಒಮ್ಮೆ ನೀ ಒಪ್ಪಲಾರೆಯ?
 ಪ್ರೇಮ ಕನ್ನಿಕೆ ನಿನ್ನ ಮೇಲೆ ಕವಿತೆ ಕಟ್ಟುವಾಸೆ
ಕನಿಕರಿಸಿ ಬಂದು ಕೆಳಲಾರೆಯಾ?
ನಿನ್ನ ಪ್ರೇಮ ಶಾಖದಿ ಬೆಂದು ತಹತಹಿಸುತಿಹೆ
ಮಳೆಯಾಗಿ ಆಗಮಿಸಿ ತಂಪೆರೆಯಲಾರೆಯಾ?

ರೋಚಕವಾಗಿದೆ ಬದುಕು ನೀ ಬಂದ ಮೇಲೆ
ಹುಣ್ಣಿಮೆಯಲಿ ಉಕ್ಕುವ ಸಾಗರದಂತೆ 
ಹೃದಯದಿ ಎದ್ದಿವೆ ಸುನಾಮಿಯ ಅಲೆ
ನೀ ಬಂದು ಪಾರುಮಾದದಿರೆ ಕಳೆದುಹೋದಂತೆ
ಕಾಣಿಸುತ್ತಿದೆಯೇ ದೂರದಿ ಮುಳುಗುತ್ತಿರುವ ತಲೆ
ನನ್ನದೇ ಅದು ಬಾ ಬೇಗ ಕಾಪಾಡುವಿಯಂತೆ

ಕಣ್ಣ ಮಿಟುಕಿಸಿ ಮುಗುಳ್ನಗಬೇಡ ಸುಂದರಿ
ಮನ್ಮಥ ಬಾಣ ಹೊಕ್ಕೀತು ಎದೆಯ
ಮುಖವ ಕೆಂಪಡರಿಸಿ ನೆಲನೋದ ಬೇಡ ಕಿನ್ನರಿ
ರವಿಯೂ ನಾಚಿ ಮರೆತಾನು ತನ್ನ ಉದಯ
ಹಿಂತಿರುಗಿ ನೋಡದೆ ಹಾಗೆ ಹೋಗದಿರು
ಸಹಿಸಲಾರದು ನನ್ನ ಪುಟ್ಟ ಹೃದಯ

ನೀನೇಕೆ ಬಂದೆ ಮಿಂಚಂತೆ ಈ ಬಾಳಲಿ
ಅರಿಯದೆ ತಲೆ ಕೆಟ್ಟು ಹೋಗಿದೆ
ಹುಚ್ಚನಾಗುವ ಮುನ್ನ, ನಿನ್ನ ತೋಳಲಿ
ನನ್ನ ಬಳಸಿ ಮೆಲ್ಲನೆ ಸಂತೈಸಬಾರದೆ? 
ಬರಬಹುದೇ ನಾ ನಿನ್ನ ಬದುಕಲಿ 
ಕೈಚಾಚಿ ಸುಮ್ಮನೆ ಕರೆಯಬಾರದೆ?
                      - ಭಾರತೀಯ
                        ಪ್ರಸನ್ನ ಆರ್ ಹೆಗಡೆ    

0 ಕಾಮೆಂಟ್‌(ಗಳು):