Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಗುರುವಾರ, ಮೇ 10, 2012
ಮಳೆ ತುಂಬಿ ಬಂದ ರಾತ್ರಿಯಲ್ಲಿ 
ನಿನ್ನ ನೆನಪು ಎಲ್ಲಿ ಕೊಚ್ಚಿ ಹೋಯಿತು?
ಹೇಳದಾಯಿತು, ಮನಸು ಕೇಳದಾಯಿತು 
ಏಕೆ ಹೀಗೆ ನಿನ್ನ ಹಿಂದೆ ಓಡಿ ಹೋಯಿತು?


ಕನಸ ತುಂಬಿಕೊಂಡ ಹೃದಯದಲ್ಲಿ
ಮರೆಯಲಾರದಂತ ಗಾಯವಾಯಿತು
ಬಿಕ್ಕಿ ಅತ್ತಿತು, ನಿನ್ನ  ನೆನೆಯಿತು
ಬಾಯಿಬಿಟ್ಟು ನುಡಿಯದಾಯಿತು!


ಒತ್ತೆಯಿಟ್ಟ ಭರವಸೆಗಳಲ್ಲಿ
ನಂಬಿಕೆಯು ಏಕೆ ದೂರವಾಯಿತು?
ಮಾತ ಮರೆತಿತು, ದುಗುಡ ಬೆಳೆಯಿತು
ಆಸೆ ಪಶುವಿನಂತೆ ಸತ್ತಿತು

ಹುಡುಕ ಹೊರಟೆ ನಾನು ತಪ್ಪೆಲ್ಲಿ?
ಎತ್ತ ಏನು ಎಂದು ತಿಳಿಯದಾಯಿತು..
ಯೋಚನೆಗಳ  ದೊಡ್ಡ ಹುತ್ತ  ಬೆಳೆಯಿತು
ಆಲೋಚನೆಯ ದಾರಿ ತಪ್ಪಿತು.!

ಗೊತ್ತಿರದ ಒಂದು ಸುಳಿಯಲ್ಲಿ 
ಸಿಕ್ಕಿದ ಜೀವ ಒದ್ದಾಡಿತು   
ಹೊರ ಬರುವ ದಾರಿ ತಿಳಿಯದೆ  
ಕೈಯನ್ನೊಮ್ಮೆ  ಮೆಲಕ್ಕೆತ್ತಿತು..


ನೋಡುತ್ತಿದ್ದ ಎರಡು ಕಂಗಳಲ್ಲಿ 
ನಾಲ್ಕು ಹನಿಗಳು ತುಂಬಿ ಬಂದಿತು 
ಏನೂ  ಮಾಡದೆ ತೋಯ್ವ ಮಳೆಯಲಿ 
ಸುಮ್ಮನಾಗಿ ಕೊಚ್ಚಿ ಹೋಯಿತು..
                                   -ಭಾರತೀಯ 
                                    ಪ್ರಸನ್ನ ಆರ್ ಹೆಗಡೆ 

0 ಕಾಮೆಂಟ್‌(ಗಳು):