Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಜನವರಿ 28, 2013
ಹೊತ್ತಾಯಿತು ಸ್ವಾಮಿ, ಸಮಯ ಹೋಗಿದ್ದೆ ತಿಳಿಯಲಿಲ್ಲ!
ಚಳಿಯಲ್ಲಿ ಬೆಚ್ಚನೆ ಹೊದ್ದು ಮಲಗಿದರೆ
ಕಾಲ ಕಳೆದದ್ದು ಗೊತ್ತಾಗುವುದೇ?
ಗೊತ್ತಾಗಿ ಆಯಿತಲ್ಲ? ಇನ್ನೇನು ಮಾಡುವುದು..
ನಿತ್ಯ ಕರ್ಮಗಳ ಮುಗಿಸಿ,
ಚುರುಗುಡುವ ಹೊಟ್ಟೆಗೊಂದಿಷ್ಟುಹಿಟ್ಟು ತುರುಕಿ
ಕಾಲಿಗೆ ಚಕ್ರ ಕಟ್ಟಿ ಕೊಂಡವರಂತೆ
ದುಡುದುಡನೆ ಓಡುವುದು

ಏದುಸಿರು ಬಿಡುತ್ತ ಅಂತೂ ಇಂತೂ ಗಮ್ಯ ತಲುಪಿ
ಎದುರು ಬಂದವ್ರಿಗೊಮ್ಮೆ ಹಲ್ಲು ತೋರಿಸಿ
ಕುರ್ಚಿಯ ಮೇಲೆ ಕುಳಿತೆವೆಂದರೆ
ಹೊತ್ತು ಹೋಗಿದ್ದೆ ತಿಳಿಯುವುದಿಲ್ಲ
ಕತ್ತಲಾದಮೇಲೆ ಮತ್ತೊಮ್ಮೆ ಮನೆಯ ನೆನಪಾಗಿ
ತೀರದ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡು
ವ್ಯವಸ್ಥೆಗೆ, ಹಣೆಬರಹಕ್ಕೆ ಬಯ್ದುಕೊಳ್ಳುವುದು

ಶನಿವಾರ ರವಿವಾರ ಬಂತೆಂದರೆ ಸಾಕು
ಯೋಜನೆಗಳ ಸರಮಾಲೆ
ಶುಕ್ರವಾರವೇ ತಯಾರಾಗಿರುವುದು!
ಶಾಪಿಂಗ್, ಡೇಟಿಂಗ್, ವಾಷಿಂಗ್...
ಆದರೆ ಕಡೆಗೆ ಸಫಲವಾಗೋದು ಸ್ಲೀಪಿಂಗ್

ಮತ್ತೆ ಸೋಮವಾರ ಬರಲು ಹೊರಳಿ
ಮುಖವ ಮಾಡುವೆವು ಆಫೀಸಿನತ್ತ ಮರಳಿ
ಅದೇ ಜಾಗ ಅದೇ ಕುರ್ಚಿ,
ಅದೇ ಹವಾನಿಯಂತ್ರಿತ ಕಾರ್ಯಾಲಯ
ಆದರೆ ಒಳಗೆ ಕುಳಿತ
ತಣ್ಣನೆಯ ತಲೆಗಳಲ್ಲಿ ಯೋಚನೆಗಳ ಧಗಧಗ!

ಕತ್ತೆಯಂತೆ ದುಡಿದು, ದಣಿದ ದೇಹ
ದನದಂತೆ ತಿಂದು, ಮೂಲೆಯನರಸಿ
ನಾಯಿಯಂತೆ ಬಿದ್ದುಕೊಳ್ಳುವುದ ನೋಡಿದಾಗ
ಸಾಕಪ್ಪ ಸಾಕು ಎನಿಸಿದರೂ..
ಕಾಂಚಾಣ ಕುಣಿಸುತ್ತಿರುವ ಜಗದಿ
ನಾವು ಇದ್ದೇವೆ ಎಂದು ಕುಣಿದು ತೋರಿಸಲು
ಬೆಳಿಗ್ಗೆ ಬೇಗನೆ ಎದ್ದು ಮತ್ತೆ
ಕೆಲಸಕ್ಕೆ ಹೊರಡಬೇಕು!!

-ಭಾರತಿಯ 

0 ಕಾಮೆಂಟ್‌(ಗಳು):