Popular Posts
-
ಮತ್ಸ್ಯಯಂತ್ರವ ಭೇದಿಸಿ ವರಿಸುವವನಿಗೆ ಕಾದಿದ್ದಳು ಹಿಡಿದು ಹೂಮಾಲೆಯ ಕೈಯಲ್ಲಿ ಅವಳು ಕೃಷ್ಣೆ ನಾಮಾಂಕಿತೆ ಆಕೆ, ಕೃಷ್ಣವರ್ಣದ ಸುಂದರಿ ಕೃಷ್ಣನ ಮಾನಸ ಸೋದರಿ, ಪಾಂಚಾಲ...
-
ಮುರಳಿಯ ಮಧುರ ಗಾನಕೆ ಮನಸೋತಳಾ ಬಾಲಿಕೆ ನಿಂತು ತಾ ದೂರದೆ ಕೃಷ್ಣನ ಕಂಡಳೋ ರಾಧೆ ಸುತ್ತಲೂ ಗೋಪಿಕಾ ಸ್ತ್ರೀಯರು ದೇವನ ಜೊತೆಗೂಡಿರಲು ನಿರ್ಮಲ ಭಾವದಿಂದಲೆ ...
-
ಹೇಳಬೇಕೆಂದುಕೊಂಡೆ ಗೆಳತಿ ಆಗಲಿಲ್ಲ... ಏಕೆಂದರೆ ನಿನ್ನ ನಾ ಅರಿಯಬೇಕಾದರೆ ಜೊತೆ ಜೊತೆಗೆ ಹೆಜ್ಜೆ ಹಾಕಬೇಕು ಮನಸು ಬಿಚ್ಚಿ ಮಾತಾಡಬೇಕು ದಾರಿಯಲಿ ...
-
ಸ್ಟೀವ್ ಜಾಬ್ಸ್ ಅಗಾಧ ಸಂಪತ್ತು ಮನೆಯಲಿ ತುಂಬಿರಲು ಸುಖವಾಗಿ ಉಂಡಾಡಿ ತಿರುಗಾಡುವುದ ಬಿಟ್ಟು ಕ್ರೀಯಾಶೀಲತೆಯ ಹಿಂದೆ ಬಿದ್ದವನ ಬದುಕಿನತ್ತ ಒಮ್ಮೆ ಕಣ್ಣನರಳಿಸಿದಾಗ ಕಣ್...
-
ನೂರು ದನಿಗಳು ಸುತ್ತ ಸೇರಿ ಕೇಕೆ ಹಾಕುತ್ತಿವೆ ತಾಳಿಕೊ, ಕೇಳಿಸಿಕೊ ನಿನಗೆ ಬೇಕಾದ್ದನ್ನು ಕಿತ್ತೊಗೆ ನಿನಗೆ ಬೇಡವಾದದ್ದನ್ನು ಉತ್ತೇಜಿಸಿಕೊ ಮನವೇ ನಿನ್ನ ...
-
ನಕ್ಕೋತ ಬಂದಳ ಆಕಿ ನಕ್ಕೋತ ಬಂದಳ ಆಕಿ ಮುಂಗುರುಳ ಗಾಳಿಗೆ ತೇಲಿ ಆ ಸೊಂಟ ತುಸುವಾಗಿ ಬಳುಕಿ ನಕ್ಕೋತ ಬಂದಳ ಆಕಿ ರವಿಯೆದ್ದ ಮುಂಜಾನೆಯಾಗ ಮಂಜಿನ್ನು ಹಾರದಿರುವಾಗ ಆ...
-
"ಚೆನ್ನಾಗಿರು" ತಂಗಾಳಿಯಂತೆ ತಿಳಿಯಾಗಿ ಬಂದು ಮಿಂಚಂತೆ ಮಾಯವಾದವಳ ಮನದೊಳಗೆ ಮರು ಮರುಗಿ ಮರಳಿ ಹುಡುಕಲೇನು? ಬಿನ್ನವಿಸಲು ಬಾಯೇ ಬರಲಿಲ್ಲವಲ್ಲ ಎಂದ...
-
ಮುಸ್ಸಂಜೆ ಮಳೆ ಮುಸ್ಸಂಜೆ ಮಳೆಯ ಮಾರ್ಧವದಿ ಮುಗ್ಧ ಮನ ಮಗುವಾಗಿದೆ ಎಲ್ಲೋ ಬಿದ್ದು ಮುತ್ತಾಗಬೇಕಿದ್ದ ಹನಿ ನನ್ನ ಮೇಲೆರಗಿ ತಂಪೆರೆದಿದೆ ನಾಚಿ ಕೆಂಪಾದ ಸೂರ್ಯನೂ ಮಾಯ ಬರಲಾ...
-
ವಿಶೇಷವೇನಿಲ್ಲ, ಎರಡೇ ಟೈಯರ್ರು ಹಳೇ ಹರಕ್ಯುಲಸ್ ಮಾಡೆಲ್ಲು ಕಾಲಕಾಲಕ್ಕೂ ಎಣ್ಣೆ ಬಿಟ್ಟು ಈಗಲೂ ಚೆನ್ನಾಗಿದೆ ಅಪ್ಪಯ್ಯನ ಸೈಕಲ್ಲು ನೌಕರಿಗೆ ಸೇರಿದಾಗ ಮ...
-
ಅಳುವ ಕಂದನ ಇಂಪಾದ ದನಿ ಅಲೆಯಂತೆ ತಾಕುತಿರಲು ಕಿವಿಯ ಮೇಲೆ ಜನ್ಮ ಜನ್ಮದ ಅನುಬಂಧ ಮೀಟುತಿದೆ ಎದೆಯಲ್ಲಿ ಬಾ ಮಗುವೆ ಹಾಲುಣಿಸುವೆ ನಿನಗೆ ನಾನೇ ಹೊತ್ತಿರುವೆ...
Blog Archive
ಒಟ್ಟು ಪುಟವೀಕ್ಷಣೆಗಳು
Blogger ನಿಂದ ಸಾಮರ್ಥ್ಯಹೊಂದಿದೆ.
ನನ್ನ ಬಗ್ಗೆ
- ಭಾರತೀಯ
- ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?
ಬೆಂಬಲಿಗರು
ಈ ಬ್ಲಾಗ್ ಅನ್ನು ಹುಡುಕಿ
ಶುಕ್ರವಾರ, ಫೆಬ್ರವರಿ 14, 2014
ಜೊತೆ ಜೊತೆಗೆ ನಡೆಯೋಣ
ಹಿಡಿತದಲ್ಲಿರದ ಕನಸುಗಳು ನಿಜವಾಗಿ
ಉಪ್ಪು,ಹುಳಿ,ಖಾರ ಬಯಸುವ ಇಂದ್ರೀಯಗಳು|
ಅತ್ತಿತ್ತ ಅರಸಿದಾಗ ಅವಳು ಕಂಡಳು
ಮೊಟ್ಟಮೊದಲು ಮನಸಿಗೆ ಹಿಡಿಸಿದಳು||
ಗೆಜ್ಜೆಯ ಸದ್ದು ಮಾಡುತ್ತಾ ಅವಳು
ಹೆಜ್ಜೆಯ ಜೊತೆಜೊತೆಗೆ ಹಾಕುತಿರಲು|
ವಜ್ಜೆಯಾದ ಹೃದಯದಲ್ಲಿ
ಲಜ್ಜೆಯ ಭಾವ ಮೂಡಿತು||
ನಾನೂ ನೋಡಿದ್ದೇನೆ ಹುಡುಗಿಯರ ಬಹಳ
ಆದರೆ ಇಂತಹವಳು ಸಿಗುವುದು ವಿರಳ|
ಇವಳ ಶಬ್ಧಕೋಶದಿ ಇಲ್ಲವೇ ಇಲ್ಲ ಜಗಳ
ಈಕೆ ಮಾತ್ರ ಯಾಕೆ ಇಷ್ಟು ಸರಳ?||
ನಲ್ಮೆಯ ನಲ್ಲೆ ಎದುರಿರಲು
ಒಲುಮೆಯ ಮಾತು ಬರದಾಯಿತು|
ಸುಳಿಯೊಳಗೆ ಸಿಕ್ಕ ಜೀವದಂತೆ
ವಿಲವಿಲನೆ ಒದ್ದಾಡಿತು||
ಪ್ರಿಯೆ,
ರಸಿಕ ಕವಿಯೆಂದು ಜರೆಯಬೇಡ
ಮತ್ತೆ ಮತ್ತೆ ನೋಡಿ ನಗಬೇಡ|
ಹತ್ತಿರ ಬಂದಾಗ ಓಡಬೇಡ
ಮುಗ್ಧಮನವಿದು ಅರಿಯದಿರಬೇಡ||
ಆರದ ದಾಹ, ತೀರದ ಮೋಹ
ಹರೆಯದ ಬಯಕೆಗಳ ಮೆಟ್ಟಿನಿಂತು|
ಪ್ರೌಢತೆಯ ಕಡೆಗೆ ತಿರುಗುವಲ್ಲಿ
ಎಡವಿದ ಮನ ಮತ್ತೆ ಜಾರಿತು||
ನೀ ದೂರವಿದ್ದರೂ ಪರವಾಗಿಲ್ಲ
ಮಾತನಾಡದೇ ಹೋದರೂ ಚಿಂತೆಯಿಲ್ಲ|
ಆಂತರ್ಯದಲ್ಲೊಂದು ಸಣ್ಣ ಸೆಳೆತ
ಕೆಣಕುವುದು ನನ್ನ ನಾಡಿ ಮಿಡಿತ||
ಗೊತ್ತು ಗೆಳತಿ ಒಲವೊಂದೆ ಬದುಕಲ್ಲ
ಸವಾಲುಗಳಿರದ ಜೀವನವಿಲ್ಲ|
ನಂಬಿಕೆಯ ಠೇವಣಿ ನೀ ಜಮೆ ಮಾಡಿದರೆ
ಭದ್ರತೆಯ ಬಡ್ಡಿ ನಾ ನೀಡುವೆ||
ನನ್ನಾಸೆಗಳಿಗೆ ಉತ್ತರವಾಗಿ
ನೀ ಬರಬೇಕೆಂದು ನಾ ಬಯಸುವುದಿಲ್ಲ|
ಸ್ವಾರ್ಥವ ಮೀರಿದ ಪಯಣದುದ್ದಕ್ಕೆ
ಸಹಗಾಮಿನಿಯಾಗಿ ಬರಲಾರೆಯಾ?||
- ಭಾರತೀಯ
ಪ್ರಸನ್ನ. ಆರ್. ಹೆಗಡೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
3 ಕಾಮೆಂಟ್(ಗಳು):
Hrudayadalli mugdha nage mudisitu nimma e sundara kavana... super writing, dedicated to those who have a one way valentine :)
ಬಹಳ ಚೆನ್ನಾಗಿದೆ
Raghavendra mattu Sneha ibbarigu dhanyavaadagalu :-)
ಕಾಮೆಂಟ್ ಪೋಸ್ಟ್ ಮಾಡಿ