Popular Posts
-
ಮತ್ಸ್ಯಯಂತ್ರವ ಭೇದಿಸಿ ವರಿಸುವವನಿಗೆ ಕಾದಿದ್ದಳು ಹಿಡಿದು ಹೂಮಾಲೆಯ ಕೈಯಲ್ಲಿ ಅವಳು ಕೃಷ್ಣೆ ನಾಮಾಂಕಿತೆ ಆಕೆ, ಕೃಷ್ಣವರ್ಣದ ಸುಂದರಿ ಕೃಷ್ಣನ ಮಾನಸ ಸೋದರಿ, ಪಾಂಚಾಲ...
-
ಮುರಳಿಯ ಮಧುರ ಗಾನಕೆ ಮನಸೋತಳಾ ಬಾಲಿಕೆ ನಿಂತು ತಾ ದೂರದೆ ಕೃಷ್ಣನ ಕಂಡಳೋ ರಾಧೆ ಸುತ್ತಲೂ ಗೋಪಿಕಾ ಸ್ತ್ರೀಯರು ದೇವನ ಜೊತೆಗೂಡಿರಲು ನಿರ್ಮಲ ಭಾವದಿಂದಲೆ ...
-
ಹೇಳಬೇಕೆಂದುಕೊಂಡೆ ಗೆಳತಿ ಆಗಲಿಲ್ಲ... ಏಕೆಂದರೆ ನಿನ್ನ ನಾ ಅರಿಯಬೇಕಾದರೆ ಜೊತೆ ಜೊತೆಗೆ ಹೆಜ್ಜೆ ಹಾಕಬೇಕು ಮನಸು ಬಿಚ್ಚಿ ಮಾತಾಡಬೇಕು ದಾರಿಯಲಿ ...
-
ಸ್ಟೀವ್ ಜಾಬ್ಸ್ ಅಗಾಧ ಸಂಪತ್ತು ಮನೆಯಲಿ ತುಂಬಿರಲು ಸುಖವಾಗಿ ಉಂಡಾಡಿ ತಿರುಗಾಡುವುದ ಬಿಟ್ಟು ಕ್ರೀಯಾಶೀಲತೆಯ ಹಿಂದೆ ಬಿದ್ದವನ ಬದುಕಿನತ್ತ ಒಮ್ಮೆ ಕಣ್ಣನರಳಿಸಿದಾಗ ಕಣ್...
-
ನೂರು ದನಿಗಳು ಸುತ್ತ ಸೇರಿ ಕೇಕೆ ಹಾಕುತ್ತಿವೆ ತಾಳಿಕೊ, ಕೇಳಿಸಿಕೊ ನಿನಗೆ ಬೇಕಾದ್ದನ್ನು ಕಿತ್ತೊಗೆ ನಿನಗೆ ಬೇಡವಾದದ್ದನ್ನು ಉತ್ತೇಜಿಸಿಕೊ ಮನವೇ ನಿನ್ನ ...
-
ನಕ್ಕೋತ ಬಂದಳ ಆಕಿ ನಕ್ಕೋತ ಬಂದಳ ಆಕಿ ಮುಂಗುರುಳ ಗಾಳಿಗೆ ತೇಲಿ ಆ ಸೊಂಟ ತುಸುವಾಗಿ ಬಳುಕಿ ನಕ್ಕೋತ ಬಂದಳ ಆಕಿ ರವಿಯೆದ್ದ ಮುಂಜಾನೆಯಾಗ ಮಂಜಿನ್ನು ಹಾರದಿರುವಾಗ ಆ...
-
"ಚೆನ್ನಾಗಿರು" ತಂಗಾಳಿಯಂತೆ ತಿಳಿಯಾಗಿ ಬಂದು ಮಿಂಚಂತೆ ಮಾಯವಾದವಳ ಮನದೊಳಗೆ ಮರು ಮರುಗಿ ಮರಳಿ ಹುಡುಕಲೇನು? ಬಿನ್ನವಿಸಲು ಬಾಯೇ ಬರಲಿಲ್ಲವಲ್ಲ ಎಂದ...
-
ಮುಸ್ಸಂಜೆ ಮಳೆ ಮುಸ್ಸಂಜೆ ಮಳೆಯ ಮಾರ್ಧವದಿ ಮುಗ್ಧ ಮನ ಮಗುವಾಗಿದೆ ಎಲ್ಲೋ ಬಿದ್ದು ಮುತ್ತಾಗಬೇಕಿದ್ದ ಹನಿ ನನ್ನ ಮೇಲೆರಗಿ ತಂಪೆರೆದಿದೆ ನಾಚಿ ಕೆಂಪಾದ ಸೂರ್ಯನೂ ಮಾಯ ಬರಲಾ...
-
ವಿಶೇಷವೇನಿಲ್ಲ, ಎರಡೇ ಟೈಯರ್ರು ಹಳೇ ಹರಕ್ಯುಲಸ್ ಮಾಡೆಲ್ಲು ಕಾಲಕಾಲಕ್ಕೂ ಎಣ್ಣೆ ಬಿಟ್ಟು ಈಗಲೂ ಚೆನ್ನಾಗಿದೆ ಅಪ್ಪಯ್ಯನ ಸೈಕಲ್ಲು ನೌಕರಿಗೆ ಸೇರಿದಾಗ ಮ...
-
ಅಳುವ ಕಂದನ ಇಂಪಾದ ದನಿ ಅಲೆಯಂತೆ ತಾಕುತಿರಲು ಕಿವಿಯ ಮೇಲೆ ಜನ್ಮ ಜನ್ಮದ ಅನುಬಂಧ ಮೀಟುತಿದೆ ಎದೆಯಲ್ಲಿ ಬಾ ಮಗುವೆ ಹಾಲುಣಿಸುವೆ ನಿನಗೆ ನಾನೇ ಹೊತ್ತಿರುವೆ...
Blog Archive
ಒಟ್ಟು ಪುಟವೀಕ್ಷಣೆಗಳು
Blogger ನಿಂದ ಸಾಮರ್ಥ್ಯಹೊಂದಿದೆ.
ನನ್ನ ಬಗ್ಗೆ
- ಭಾರತೀಯ
- ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?
ಬೆಂಬಲಿಗರು
ಈ ಬ್ಲಾಗ್ ಅನ್ನು ಹುಡುಕಿ
ಭಾನುವಾರ, ಫೆಬ್ರವರಿ 16, 2014
ನರ್ತಿಸುತ್ತಿದ್ದಾಳೆ
ಕಾಶ್ಮೀರಿ ಬಾಲೆ
ಕತ್ತೆತ್ತಿದಷ್ಟೂ
ಹಿಮಚ್ಛಾದಿತ ಕಾಡು
ಮೈ ಕೊರೆವ ಛಳಿಯ ಬೀಡು|
ಕಣಿವೆ ಕೊಳ್ಳಗಳ ನಾಡು
ಸುಂದರ ಕಾಶ್ಮೀರವ ನೋಡು||
ನಿಸರ್ಗವೇ
ಕಟ್ಟಿಕೊಟ್ಟ ಸ್ವರ್ಗ
ಭೂರಮೆಯ
ರತ್ನ ಮುಕುಟ|
ಹಸಿರವಸ್ತ್ರ
ಉಟ್ಟ ನಿಸರ್ಗ
ಕಣ್ ಕೋರೈಸುವಂತೆ ಹಿಮಲೇಪ||
ನರ್ತಿಸುತ್ತಿರುವಳು
ಕಾಶ್ಮೀರಿ ಬಾಲೆ
ನವಭಾವಗಳ
ನಮೂದಿಸುತ್ತಾ
ನವರಸಗಳ
ನಿವೇದಿಸುತ್ತಾ||
ನರ್ತಿಸುತ್ತಿರುವಳು
ಗೆಜ್ಜೆಕಟ್ಟಿ|
`ಝಲ್'`ಝಲ್' ನಾದ ಹೊಮ್ಮಿಸುತ್ತಾ
ಶ್ರೋತೃಗಳ
ಮನ ತಣಿಸುತ್ತಾ||
ಮೊಳಗುತ್ತಿದೆ
ಸನಿಹದಲ್ಲಿ
ಬಂದೂಕಿನ
ನಿರಂತರ ಮೊರೆತ|
ಕೊನೆ ಉಸಿರು ಬಿಡುವಾಗೀನ ಚೀತ್ಕಾರ
ರಕ್ತದೋಕುಳಿಯ
ಮೇಲೆ ಜೈಕಾರ||
ನಲುಗಿ ನಡುಗುತ್ತಿದೆ ಕಾಶ್ಮೀರ
ವಿದ್ರೋಹಿಗಳ
ಕೈಯಲ್ಲಿ ಸಿಲುಕಿ|
`ದಾಲ್'ನ ನೀರಿನಲ್ಲೂ ಲಾಲ್
ವರ್ಣ
ಭಯದ ವಾತಾವರಣ ಕ್ಷಣ ಕ್ಷಣ||
ಓ ಅನಾಮಿಕ ಆಗಂತುಕ
ಕ್ರೂರ ನೀ ಭಯೋತ್ಪಾದಕ|
ಉತ್ತರಿಸು
ಓ ನರಹಂತಕ
ಇನ್ನೆಷ್ಟು
ದಿನ ಈ ಪಾತಕ||
ಉಸಿರಾಡುವ
ಗಾಳಿಯಲ್ಲಿಯೂ
ಏತಕೀ ತಣ್ಣನೆಯ ಕ್ರೌರ್ಯ?
ಏತಕೀ ಬಿಡಲಾರದ ಹಗೆತನ?||
ಎಲ್ಲಿದ್ದಾರೆ
ಕಾಶ್ಮೀರಿಗಳು?
ನಿಸರ್ಗ
ಮಾತೆಯ ಸ್ವಂತನಾಡಿನಲ್ಲೆ?|
ಸುಂದರ ಶಾಲಿನ ಒಳಗಡೆಯೇ? ಅಥವಾ
ಸತ್ಯ ಸಾರುವ ಸಮಾಧಿಗಳೊಳಗೆಯೇ?||
ನುಣುಪು
ಮೈಯ ಬಾಲೆ ನರ್ತಿಸುತ್ತಿದ್ದಾಳೆ
ಬಂದೂಕಿನ
ತಾಳಕ್ಕೆ ತಕ್ಕಂತೆ|
ಶ್ರೋತೃಗಳೇ
ಇಲ್ಲದ ಸಭಾಭವನದಿ
ಯೋಧನಿನ್ನೂ
ನಿಂತಿದ್ದಾನೆ ಮೈ ಕೊರೆವ ಛಳಿಯಲ್ಲಿ|।
- ಭಾರತೀಯ
ಪ್ರಸನ್ನ ಆರ್ ಹೆಗಡೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
2 ಕಾಮೆಂಟ್(ಗಳು):
Kashmir mele ero Nimma Preethi bhavanegalu, yodhar meliro kalajiyannu toruva nimma kavite chennagide.. adre allaguva anahutagalige karana vagiruva adara hinduruva rajakaranada bagge barididre chennagirtittu..
Khandita, raajakaaranigala mattu kaashmirada hesarinalli aaguttiruva raajakaranada kuritu prajnapoorvakavaagiye naanu baredilla. Yaakendare kaleda 67 varshagalli enu maadadavaru mundeyaadaru enadaru maaduviremba nambike nanagulidilla... aadare kaashmirigalannu bharatada itara raajyagala janarante nodubekagiruva namma manastitiya agatyateyannu etti torisuvudu ee kavanada pramukha aashaya. Nimma salahege anantanta dhanyavaadagalu :-)
ಕಾಮೆಂಟ್ ಪೋಸ್ಟ್ ಮಾಡಿ