Popular Posts
-
ಮತ್ಸ್ಯಯಂತ್ರವ ಭೇದಿಸಿ ವರಿಸುವವನಿಗೆ ಕಾದಿದ್ದಳು ಹಿಡಿದು ಹೂಮಾಲೆಯ ಕೈಯಲ್ಲಿ ಅವಳು ಕೃಷ್ಣೆ ನಾಮಾಂಕಿತೆ ಆಕೆ, ಕೃಷ್ಣವರ್ಣದ ಸುಂದರಿ ಕೃಷ್ಣನ ಮಾನಸ ಸೋದರಿ, ಪಾಂಚಾಲ...
-
ಮುರಳಿಯ ಮಧುರ ಗಾನಕೆ ಮನಸೋತಳಾ ಬಾಲಿಕೆ ನಿಂತು ತಾ ದೂರದೆ ಕೃಷ್ಣನ ಕಂಡಳೋ ರಾಧೆ ಸುತ್ತಲೂ ಗೋಪಿಕಾ ಸ್ತ್ರೀಯರು ದೇವನ ಜೊತೆಗೂಡಿರಲು ನಿರ್ಮಲ ಭಾವದಿಂದಲೆ ...
-
ಹೇಳಬೇಕೆಂದುಕೊಂಡೆ ಗೆಳತಿ ಆಗಲಿಲ್ಲ... ಏಕೆಂದರೆ ನಿನ್ನ ನಾ ಅರಿಯಬೇಕಾದರೆ ಜೊತೆ ಜೊತೆಗೆ ಹೆಜ್ಜೆ ಹಾಕಬೇಕು ಮನಸು ಬಿಚ್ಚಿ ಮಾತಾಡಬೇಕು ದಾರಿಯಲಿ ...
-
ಸ್ಟೀವ್ ಜಾಬ್ಸ್ ಅಗಾಧ ಸಂಪತ್ತು ಮನೆಯಲಿ ತುಂಬಿರಲು ಸುಖವಾಗಿ ಉಂಡಾಡಿ ತಿರುಗಾಡುವುದ ಬಿಟ್ಟು ಕ್ರೀಯಾಶೀಲತೆಯ ಹಿಂದೆ ಬಿದ್ದವನ ಬದುಕಿನತ್ತ ಒಮ್ಮೆ ಕಣ್ಣನರಳಿಸಿದಾಗ ಕಣ್...
-
ನೂರು ದನಿಗಳು ಸುತ್ತ ಸೇರಿ ಕೇಕೆ ಹಾಕುತ್ತಿವೆ ತಾಳಿಕೊ, ಕೇಳಿಸಿಕೊ ನಿನಗೆ ಬೇಕಾದ್ದನ್ನು ಕಿತ್ತೊಗೆ ನಿನಗೆ ಬೇಡವಾದದ್ದನ್ನು ಉತ್ತೇಜಿಸಿಕೊ ಮನವೇ ನಿನ್ನ ...
-
ನಕ್ಕೋತ ಬಂದಳ ಆಕಿ ನಕ್ಕೋತ ಬಂದಳ ಆಕಿ ಮುಂಗುರುಳ ಗಾಳಿಗೆ ತೇಲಿ ಆ ಸೊಂಟ ತುಸುವಾಗಿ ಬಳುಕಿ ನಕ್ಕೋತ ಬಂದಳ ಆಕಿ ರವಿಯೆದ್ದ ಮುಂಜಾನೆಯಾಗ ಮಂಜಿನ್ನು ಹಾರದಿರುವಾಗ ಆ...
-
"ಚೆನ್ನಾಗಿರು" ತಂಗಾಳಿಯಂತೆ ತಿಳಿಯಾಗಿ ಬಂದು ಮಿಂಚಂತೆ ಮಾಯವಾದವಳ ಮನದೊಳಗೆ ಮರು ಮರುಗಿ ಮರಳಿ ಹುಡುಕಲೇನು? ಬಿನ್ನವಿಸಲು ಬಾಯೇ ಬರಲಿಲ್ಲವಲ್ಲ ಎಂದ...
-
ಮುಸ್ಸಂಜೆ ಮಳೆ ಮುಸ್ಸಂಜೆ ಮಳೆಯ ಮಾರ್ಧವದಿ ಮುಗ್ಧ ಮನ ಮಗುವಾಗಿದೆ ಎಲ್ಲೋ ಬಿದ್ದು ಮುತ್ತಾಗಬೇಕಿದ್ದ ಹನಿ ನನ್ನ ಮೇಲೆರಗಿ ತಂಪೆರೆದಿದೆ ನಾಚಿ ಕೆಂಪಾದ ಸೂರ್ಯನೂ ಮಾಯ ಬರಲಾ...
-
ವಿಶೇಷವೇನಿಲ್ಲ, ಎರಡೇ ಟೈಯರ್ರು ಹಳೇ ಹರಕ್ಯುಲಸ್ ಮಾಡೆಲ್ಲು ಕಾಲಕಾಲಕ್ಕೂ ಎಣ್ಣೆ ಬಿಟ್ಟು ಈಗಲೂ ಚೆನ್ನಾಗಿದೆ ಅಪ್ಪಯ್ಯನ ಸೈಕಲ್ಲು ನೌಕರಿಗೆ ಸೇರಿದಾಗ ಮ...
-
ಅಳುವ ಕಂದನ ಇಂಪಾದ ದನಿ ಅಲೆಯಂತೆ ತಾಕುತಿರಲು ಕಿವಿಯ ಮೇಲೆ ಜನ್ಮ ಜನ್ಮದ ಅನುಬಂಧ ಮೀಟುತಿದೆ ಎದೆಯಲ್ಲಿ ಬಾ ಮಗುವೆ ಹಾಲುಣಿಸುವೆ ನಿನಗೆ ನಾನೇ ಹೊತ್ತಿರುವೆ...
Blog Archive
ಒಟ್ಟು ಪುಟವೀಕ್ಷಣೆಗಳು
Blogger ನಿಂದ ಸಾಮರ್ಥ್ಯಹೊಂದಿದೆ.
ನನ್ನ ಬಗ್ಗೆ
- ಭಾರತೀಯ
- ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?
ಬೆಂಬಲಿಗರು
ಈ ಬ್ಲಾಗ್ ಅನ್ನು ಹುಡುಕಿ
ಶನಿವಾರ, ಮೇ 24, 2014
ನನ್ನ ಮೂಕ ಸ್ನೇಹಿತ
ನನ್ನ ಮನೆಗೊಬ್ಬ ಬಂದಿದ್ದ ಅಪರಿಚಿತ
ಆತ ಯಾರೆಂದು ನನಗೂ ಗೊತ್ತಿಲ್ಲ/
ನಾನು ಯಾರೆಂದು ಅವನಿಗೂ ಗೊತ್ತಿಲ್ಲ
ನಾನು ಕುತೂಹಲಿ, ಅವನು ಗಂಭೀರ!//
ಅವನ ಕರೆದುಕೊಂಡು ಬಂದಿದ್ದ ನಮ್ಮ ಮನೆಯ ಆಳು
ನಾನೇ ಕೇಳಿದೆ ಆಳನ್ನು, ಅವನಾರು?/
ಅವ ಹೇಳಿದ ಆತ ಪಕ್ಕದೂರಿನವ
ನಾ ಸಂತೋಷದಿ ಕೇಳಿದೆ ಯಾವೂರಿನವ?//
ನಾನು ಬಹಳಷ್ಟು ಪ್ರಯತ್ನಪಟ್ಟೆ
ಮಾತನಾಡಿಸಲಿಕ್ಕೆ, ಆದರೆ ಆತ ಮಾತನಾಡಲಿಲ್ಲ/
ನಾನು ಪ್ರಯತ್ನಪಟ್ಟು ಸೋತೆ
ನಂತರ ಆತನೇ ಸೂಚಿಸಿದ ತಾನು ಮೂಕನೆಂದು//
ನನಗೆ ಗೊತ್ತಿರಲಿಲ್ಲ ಅವ ಮೂಕನೆಂದು
ಹೇಳಿಕೊಂಡರೂ ಬೇಸರ ಪಡಲಿಲ್ಲ ಅವ/
ಏಕೆಂದರೆ ಅವನಿಗೆ ಆಗ ಹದಿನೆಂಟು
ಮತ್ತು ನನಗೆ ಬರೀ ಎಂಟು//
ನಂತರ ಇನ್ನೊಮ್ಮೆ ನಾನವರ ಊರಿಗೆ ಹೋಗಿದ್ದೆ
ಆದರದಿ ಸ್ವಾಗತಿಸಿದ ಸನ್ನೆಯೊಂದಿಗೆ/
ನಾನು ನಿರೀಕ್ಷಿಸಿರಲಿಲ್ಲ ಆತನ ಹೃದಯ ವೈಶಾಲ್ಯವನ್ನು
ಆಗನ್ನಿಸಿತು ಆ ಮೂಕನೇ ನಿಜವಾದ ಮನುಷ್ಯನೆಂದು!//
ಈಗಲೂ ಆತ ಸಿಗುತ್ತಲೇ ಇರುತ್ತಾನೆ
ನಾ ಆ ಊರಿಗೆ ಹೋದಾಗಲೆಲ್ಲ/
ಆಗೆಲ್ಲಾ ನನಗನಿಸುವುದು ಓ ದೇವರೇ
ಇವನ ಮಾತು ಕಸಿದುಕೊಂಡ ನೀನೆಷ್ಟು ಕಠೋರ!//
ಆತನ ಮನ ಮಗುವಿನಂತೆ ನನ್ನ
ಜೊತೆ ಸಿಕ್ಕಾಗಲೆಲ್ಲಾ ತನಗೆ ತೋಚಿದ/
ವಿಷಯಗಳನ್ನು ತಿಳಿಸುತ್ತಲಿರುತ್ತಾನೆ ಸನ್ನೆಯ ಮೂಲಕ
ಬಾರದ ಮಾತಿನ ಕೊರಗ ಮರೆತು//
ಮಾತು ಬಾರದೇ ಅವಾಂತರವಾಗುವ ದಿನಗಳಲಿ
ಸನ್ನೆಯ ಮೂಲಕ ಮಾತನಾಡಿಸುವ ಆ ಸ್ನೇಹಿತ/
ನಿಜವಾಗಿಯೂ ನನ್ನ ಪ್ರಾಣಸ್ನೇಹಿತ ನನ್ನ
ಬಿಡುವಿನ ದಿನಗಳಲಿ ನೆನಪಾಗುತ್ತಾನೆ ಸದಾ//
- ಭಾರತೀಯ
ಪ್ರಸನ್ನ ಆರ್ ಹೆಗಡೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ