Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಫೆಬ್ರವರಿ 18, 2015
ನೂರು ದನಿಗಳು ಸುತ್ತ ಸೇರಿ 
ಕೇಕೆ ಹಾಕುತ್ತಿವೆ 
ತಾಳಿಕೊ, ಕೇಳಿಸಿಕೊ ನಿನಗೆ ಬೇಕಾದ್ದನ್ನು 
ಕಿತ್ತೊಗೆ ನಿನಗೆ ಬೇಡವಾದದ್ದನ್ನು 
ಉತ್ತೇಜಿಸಿಕೊ ಮನವೇ ನಿನ್ನ ನೀನೆ 
 ನಿನಗೂ ಆಸೆ ಆಕಾಂಕ್ಷೆಗಳಿವೆ 

ಜಾತಿ - ಧರ್ಮ, ಆಚಾರ - ವಿಚಾರ
ಆಸ್ತಿ-ಅಂತಸ್ತು, ಆಹಾರ-ವಿಹಾರ 
ಚರ್ಮದ ಬಣ್ಣ, ಆಡುವ ಭಾಷೆ, ಕುಡಿಯುವ ನೀರು, ಆಳುವ ನಾಡು 
ಕಂದಕಗಳನು ಆಳವಾಗಿ ಇಳಿಸುತ್ತಿವೆ, ಗೋಡೆಗಳನು ಏಳಿಸುತ್ತಿವೆ 
ನಿರ್ಜೀವ ಕಂದಕ, ಗೋಡೆಗಳಿಗೂ ಬೆಳೆಯುವ ಮೋಹ 
ಉತ್ತೇಜಿಸಿಕೊ ಮನವೇ ನಿನ್ನ ನೀನೆ
ಕಂದಕಗಳ ಮುಚ್ಚುವುದಿದೆ, ಗೋಡೆಗಳ ಕೆಡಗುವುದಿದೆ 

ಬಂದೂಕು ತೋರಿಸಿ ಹೆದರಿಸುವುದು ಹಳೆಕಾಲ 
ಬಂದೂಕ ಮಾರದೆ ಹೆದರಿಸುವುದು ಈ ಕಾಲ 
ಹೊಟ್ಟೆಗೆ ಹಿಟ್ಟಿಲ್ಲದ ಜೀವಗಳು ನಿನ್ನತ್ತ ನೋಡುತ್ತಿವೆ 
ಸವಾಲಿದೆ ನಿನಗಾಗಿ, ವ್ಯಾಪಾರೀ ಜಗತ್ತಿನಲ್ಲಿ 
ಗಟ್ಟಿಯಾಗಿ ನಿಲ್ಲು ನೀನೆ, ನಿನ್ನ ಹಿತರಕ್ಷಣೆಗೆ 
ಉತ್ತೇಜಿಸಿಕೊ ಮನವೇ ನಿನ್ನ ನೀನೆ
ಅವಶ್ಯಕತೆಗಳ ಈಡೇರಿಸುವಷ್ಟು ಈ ಭುವಿಯಲ್ಲಿದೆ 

ಸಿಕ್ಕಿದಷ್ಟೂ ಬೇಕೆನ್ನುವ ಹಪಾಹಪಿ 
ಅಜ್ಞಾನ, ಅಸಹಾಯಕತೆ, ಮುಗ್ಧತೆಗಳ ದುರ್ಗತಿ 
ಮೇಕೆಯಿನ್ನೂ ಬೆಣ್ಣೆ ಒರೆಸಿದ ಬಾಯ ನೆಕ್ಕುತ್ತಲೇ ಇದೆ 
ಉತ್ತೇಜಿಸಿಕೊ ಮನವೇ ನಿನ್ನ ನೀನೆ
ಸಮಾನತೆ ಎಂಬ  ಒಂದು ಪದ 
ಶಬ್ದಕೊಶದಲ್ಲಿನ್ನೂ ಉಳಿದಿದೆ 

ಕಾದಿರುವ ಭಗವಂತ ಕೇಳಲು ನಿರ್ಣಯದ ದಿನ 
"ಹೇಳು  ಮಗುವೆ ಏನು ಮಾಡಿ ಬಂದಿರುವೆ ಭುವಿಯೊಳಗೆ?"
ಅತ್ತಿತ್ತ ನೋಡದಿರು ಉತ್ತರವ ನೀಡಲು 
ಮಾಡುವುದಿನ್ನು ಬೇಕಾದಷ್ಟಿದೆ, ಬೆಟ್ಟದಷ್ಟಿದೆ 
ಉತ್ತೇಜಿಸಿಕೊ ಮನವೇ ನಿನ್ನ ನೀನೆ
ಅರಿವೆಂಬ ಸಾಗರದಿ ನಿನ್ನ ನೀ ಹುಡುಕುವುದಿದೆ 

                                    - ಭಾರತೀಯ 
                                ಪ್ರಸನ್ನ. ಆರ್. ಹೆಗಡೆ 

0 ಕಾಮೆಂಟ್‌(ಗಳು):