Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಜೂನ್ 29, 2013
ಮುರಳಿಯ ಮಧುರ ಗಾನಕೆ 
ಮನಸೋತಳಾ ಬಾಲಿಕೆ 
ನಿಂತು ತಾ ದೂರದೆ 
ಕೃಷ್ಣನ ಕಂಡಳೋ ರಾಧೆ 

ಸುತ್ತಲೂ ಗೋಪಿಕಾ ಸ್ತ್ರೀಯರು 
ದೇವನ ಜೊತೆಗೂಡಿರಲು 
ನಿರ್ಮಲ ಭಾವದಿಂದಲೆ  
ಶ್ಯಾಮನ ಸ್ನೇಹಿತೆಯಾದಳೋ  ರಾಧೆ 

ವನದಲ್ಲಿ ಅರಳಿದ ಸ್ನೇಹ 
ಯಮುನೆಯಷ್ಟೇ ಪರಿಶುದ್ಧ 
ಪರಮಾತ್ಮನೂ ಮಗುವಾದ 
ರಾಧೆಯ ಹೃದಯದಿ ಕುಳಿತ 

ಮಥುರೆಯ ಆಗಸದಿ ಕಾರ್ಮೋಡ 
ಸರಿದಿತ್ತು ನಿಧಾನವಾಗಿ 
ಅಟ್ಟಹಾಸದ ಕಂಸ 
ಮಾವನ ಕೊಂದನೋ ಕೃಷ್ಣ 

ದಂಡೆತ್ತಿ ಬಂದ ಜರಾಸಂಧ 
ಮಥುರ ನಗರಿಯ ಒಳಗೆ 
ಹೆದರಿದ ಜನರೆಲ್ಲಾ ಬಂದು 
ಸಾರಿದರು ಕೃಷ್ಣನ ಬಳಿಗೆ 

ಹೊರಟರು ರಾತ್ರೋ ರಾತ್ರಿ 
ಭಗವಂತ ತೋರಿದ ಕಡೆಗೆ 
ದೇವನೊಬ್ಬನೆ ಖಾತ್ರಿ 
ಪಯಣ ಸಾಗಿತ್ತು ದ್ವಾರಕೆಯೆಡೆಗೆ 

ದೂರದಿಂದ ಓಡಿಬಂದಳು 
ಹಿಂದಿನಿಂದಲೇ ಕರೆದಳು 
ದೇವನಿಗೂ ಬೇಡವಾಯಿತೆ 
ರಾಧೆಯೆಂಬ ಬಾಲ್ಯ ಸ್ನೇಹಿತೆ?

ಹಸನ್ಮುಖಿ ಪುರುಷೋತ್ತಮ 
ನಿಂತನು ರಾಧೆಯ ಎದುರು 
ನಗುನಗುತ ನೋವನೆ ನುಂಗಿ 
ಕೈ ಬೀಸಿ ಬೀಳ್ಕೊಟ್ಟಳು ರಾಧೆ 
                               -  ಭಾರತೀಯ 
                                  ಪ್ರಸನ್ನ ಆರ್. ಹೆಗಡೆ 
                          

0 ಕಾಮೆಂಟ್‌(ಗಳು):