Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಅಕ್ಟೋಬರ್ 12, 2012



ಹೇಳಬೇಕೆಂದುಕೊಂಡೆ ಗೆಳತಿ
ಆಗಲಿಲ್ಲ... ಏಕೆಂದರೆ  
ನಿನ್ನ ನಾ ಅರಿಯಬೇಕಾದರೆ 
ಜೊತೆ ಜೊತೆಗೆ ಹೆಜ್ಜೆ ಹಾಕಬೇಕು 
ಮನಸು ಬಿಚ್ಚಿ ಮಾತಾಡಬೇಕು 
ದಾರಿಯಲಿ ಮುಳ್ಳುಗಳ ಸರಿಸಿ 
ಸಹಕರಿಸಿ ಅನುಸರಿಸಬೇಕು 
ಕಡೆಗೊಮ್ಮೆ ಬಾಯಿಬಿಟ್ಟು 
ಕಣ್ಣಲ್ಲಿ ಕಣ್ಣನಿಟ್ಟು, ಒಂದೇ ಉಸಿರಿನಲ್ಲಿ 
ನಿನ್ನ ಪ್ರೀತಿಸುವೆನೆನಬೇಕು 
ಆದರೆ ಇದನ್ನೆಲ್ಲ ಮಾಡಲು 
ನನಗೆಲ್ಲಿಂದ ಧೈರ್ಯ ಬರಬೇಕು?

ಆದರೂ ಒಂದಂತೂ  ಸತ್ಯ!
ನಿನ್ನ ಜೊತೆ ತುಸು ಕಾಲ ಕಳೆದು 
ಈ ಬದುಕಿಗೆ ಜೀವ ತುಂಬುವಾಸೆ 
ಮುಲಾಜಿಲ್ಲದೆ ಖುಷಿಯ ಕ್ಷಣಗಳ 
ಒಬ್ಬರನ್ನೊಬ್ಬರು ಸೇರಿ ಗುಣಿಸುವಾಸೆ 
ನಿನ್ನೆಲ್ಲ ನೋವುಗಳು ನನ್ನವೂ ಆಗಿ 
ಬಲುದೊಡ್ಡ ಭಾಜಕವಾಗಿ, ನಾ ಭಾಗಿಸುವಾಸೆ 
ನಿಭಂಧನೆಗಳಿಗೊಳಪಡದ ಈ ಅವಕಾಶ 
ಜೀವನ ಪೂರ್ತಿ ನಮ್ಮದಾಗ ಬೇಕಾದರೆ 
ನೀನು ಕೊಂಚ ದೊಡ್ಡ ಮನಸು ಮಾಡಬೇಕು..

ಕ್ಷಮಿಸು, ಯೋಚಿಸಿ ತಲೆ ತಿರುಗಿ ಹೋಗಿದೆ!
ಆದರೂ 
ಬಿಸಿಯಾದ ಈ ಎದೆಯ ಧಗೆಯ 
ಉರಿಯ ಆರಿಸಲು ನೀರಾಗಿ 
ಎಂದು ಬರುವೆ ನೀ ಊರಿಗೆ 
ಇಂತಿ ನಾ ಕಾಯುತಿರುವೆ...

                   - ಭಾರತೀಯ 
                     ಪ್ರಸನ್ನ ಆರ್ ಹೆಗಡೆ 

0 ಕಾಮೆಂಟ್‌(ಗಳು):