Popular Posts
-
ಮತ್ಸ್ಯಯಂತ್ರವ ಭೇದಿಸಿ ವರಿಸುವವನಿಗೆ ಕಾದಿದ್ದಳು ಹಿಡಿದು ಹೂಮಾಲೆಯ ಕೈಯಲ್ಲಿ ಅವಳು ಕೃಷ್ಣೆ ನಾಮಾಂಕಿತೆ ಆಕೆ, ಕೃಷ್ಣವರ್ಣದ ಸುಂದರಿ ಕೃಷ್ಣನ ಮಾನಸ ಸೋದರಿ, ಪಾಂಚಾಲ...
-
ಮುರಳಿಯ ಮಧುರ ಗಾನಕೆ ಮನಸೋತಳಾ ಬಾಲಿಕೆ ನಿಂತು ತಾ ದೂರದೆ ಕೃಷ್ಣನ ಕಂಡಳೋ ರಾಧೆ ಸುತ್ತಲೂ ಗೋಪಿಕಾ ಸ್ತ್ರೀಯರು ದೇವನ ಜೊತೆಗೂಡಿರಲು ನಿರ್ಮಲ ಭಾವದಿಂದಲೆ ...
-
ಹೇಳಬೇಕೆಂದುಕೊಂಡೆ ಗೆಳತಿ ಆಗಲಿಲ್ಲ... ಏಕೆಂದರೆ ನಿನ್ನ ನಾ ಅರಿಯಬೇಕಾದರೆ ಜೊತೆ ಜೊತೆಗೆ ಹೆಜ್ಜೆ ಹಾಕಬೇಕು ಮನಸು ಬಿಚ್ಚಿ ಮಾತಾಡಬೇಕು ದಾರಿಯಲಿ ...
-
ಸ್ಟೀವ್ ಜಾಬ್ಸ್ ಅಗಾಧ ಸಂಪತ್ತು ಮನೆಯಲಿ ತುಂಬಿರಲು ಸುಖವಾಗಿ ಉಂಡಾಡಿ ತಿರುಗಾಡುವುದ ಬಿಟ್ಟು ಕ್ರೀಯಾಶೀಲತೆಯ ಹಿಂದೆ ಬಿದ್ದವನ ಬದುಕಿನತ್ತ ಒಮ್ಮೆ ಕಣ್ಣನರಳಿಸಿದಾಗ ಕಣ್...
-
ನೂರು ದನಿಗಳು ಸುತ್ತ ಸೇರಿ ಕೇಕೆ ಹಾಕುತ್ತಿವೆ ತಾಳಿಕೊ, ಕೇಳಿಸಿಕೊ ನಿನಗೆ ಬೇಕಾದ್ದನ್ನು ಕಿತ್ತೊಗೆ ನಿನಗೆ ಬೇಡವಾದದ್ದನ್ನು ಉತ್ತೇಜಿಸಿಕೊ ಮನವೇ ನಿನ್ನ ...
-
ನಕ್ಕೋತ ಬಂದಳ ಆಕಿ ನಕ್ಕೋತ ಬಂದಳ ಆಕಿ ಮುಂಗುರುಳ ಗಾಳಿಗೆ ತೇಲಿ ಆ ಸೊಂಟ ತುಸುವಾಗಿ ಬಳುಕಿ ನಕ್ಕೋತ ಬಂದಳ ಆಕಿ ರವಿಯೆದ್ದ ಮುಂಜಾನೆಯಾಗ ಮಂಜಿನ್ನು ಹಾರದಿರುವಾಗ ಆ...
-
"ಚೆನ್ನಾಗಿರು" ತಂಗಾಳಿಯಂತೆ ತಿಳಿಯಾಗಿ ಬಂದು ಮಿಂಚಂತೆ ಮಾಯವಾದವಳ ಮನದೊಳಗೆ ಮರು ಮರುಗಿ ಮರಳಿ ಹುಡುಕಲೇನು? ಬಿನ್ನವಿಸಲು ಬಾಯೇ ಬರಲಿಲ್ಲವಲ್ಲ ಎಂದ...
-
ಮುಸ್ಸಂಜೆ ಮಳೆ ಮುಸ್ಸಂಜೆ ಮಳೆಯ ಮಾರ್ಧವದಿ ಮುಗ್ಧ ಮನ ಮಗುವಾಗಿದೆ ಎಲ್ಲೋ ಬಿದ್ದು ಮುತ್ತಾಗಬೇಕಿದ್ದ ಹನಿ ನನ್ನ ಮೇಲೆರಗಿ ತಂಪೆರೆದಿದೆ ನಾಚಿ ಕೆಂಪಾದ ಸೂರ್ಯನೂ ಮಾಯ ಬರಲಾ...
-
ವಿಶೇಷವೇನಿಲ್ಲ, ಎರಡೇ ಟೈಯರ್ರು ಹಳೇ ಹರಕ್ಯುಲಸ್ ಮಾಡೆಲ್ಲು ಕಾಲಕಾಲಕ್ಕೂ ಎಣ್ಣೆ ಬಿಟ್ಟು ಈಗಲೂ ಚೆನ್ನಾಗಿದೆ ಅಪ್ಪಯ್ಯನ ಸೈಕಲ್ಲು ನೌಕರಿಗೆ ಸೇರಿದಾಗ ಮ...
-
ಅಳುವ ಕಂದನ ಇಂಪಾದ ದನಿ ಅಲೆಯಂತೆ ತಾಕುತಿರಲು ಕಿವಿಯ ಮೇಲೆ ಜನ್ಮ ಜನ್ಮದ ಅನುಬಂಧ ಮೀಟುತಿದೆ ಎದೆಯಲ್ಲಿ ಬಾ ಮಗುವೆ ಹಾಲುಣಿಸುವೆ ನಿನಗೆ ನಾನೇ ಹೊತ್ತಿರುವೆ...
Blog Archive
ಒಟ್ಟು ಪುಟವೀಕ್ಷಣೆಗಳು
Blogger ನಿಂದ ಸಾಮರ್ಥ್ಯಹೊಂದಿದೆ.
ನನ್ನ ಬಗ್ಗೆ
- ಭಾರತೀಯ
- ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?
ಬೆಂಬಲಿಗರು
ಈ ಬ್ಲಾಗ್ ಅನ್ನು ಹುಡುಕಿ
ಶುಕ್ರವಾರ, ಆಗಸ್ಟ್ 24, 2012
?
ತಂಪು ತಂಗಾಳಿ ತಿಳಿಯಾಗಿ ಬೀಸುವಾಗ
ತುಂಬು ಚಂದಿರನ ನೋಡಿಕೊಂಡು
ಮೆತ್ತನೆಯ ಹುಲ್ಲು ಹಾಸಿನ ಮೇಲೆ
ಬರಿಗಾಲಲ್ಲಿ ನಡೆಯೋಣವೆಂದುಕೊಂಡು
ಭೂಮಾತೆಯ ಮೇಲೆ ಹೆಜ್ಜೆಯೂರಿದಾಗ
ಕಾಲಿಗೆ ತಂಪು ಸೂಸಿ ಮನಸು ಮಗುವಾಯಿತು
ಇಬ್ಬನಿಯೊಂದು ಮೇಲಿಂದ ಇಳಿದು
ಇನಿಯನಂತೆ ನನ್ನ ತಬ್ಬಿ
ಮಂಜು ಮುಸುಕುವ ಸಮಯದಲ್ಲಿ
ಕಚಗುಳಿಯ ಭಾವ ನೀಡಿ
ಎಲ್ಲೋ ಕರೆದುಕೊಂಡು ಹೋಗುವಾಗ
ಸ್ವರ್ಗವೇ ಬೇಡವೆನಿಸಿತು
ಬಾಗಿ ಬಳುಕುವ ಬಳ್ಳಿಯೊಂದು
ಮೆಲ್ಲ ನನ್ನ ಕಡೆಗೆ ಬಂದು
ಮುತ್ತು ನೀಡುವಂತೆ ತಾಗಿ
ತಿಳಿಯಾದುದೊಂದು ಸ್ಪರ್ಶ ನೀಡಿ
ತಿರುಗಿ ತಾ ಹೊರಟಾಗ
ನಲ್ಲೆಯ ನೆನಪು ಮಾಸಿತು
ಪ್ರಕೃತಿ ತನ್ನ ಸೌಂದರ್ಯವನ್ನೆಲ್ಲ
ನನಗಾಗಿ ಪ್ರದರ್ಶನಕ್ಕಿಟ್ಟಂತೆ ಮನವು ಬಗೆದು
ತನುವು ಗಾಳಿಯಲ್ಲಿ ತೇಲಾಡಿ
ಉಲ್ಲಾಸ ಎದೆಯ ತುಂಬೆಲ್ಲಾ ತುಳುಕಾಡಿ
ಖುಷಿಯೆಂದರೆನೆಂದು ಅರಿವಾಗಿ
ರಾತ್ರಿ ರೋಮಾಂಚನವಾಯಿತು
ಹೊರಗಣ ತಂಪು
ಒಳಗಿನ ಕಾವ ತಣಿಸುವ ಪರಿನೋಡಿ
ನಿಸರ್ಗದ ಜಾಣ್ಮೆಗೆ ತಲೆದೂಗಬೇಕೆನಿಸಿ
ಮುಂದೆ ಹೆಜ್ಜೆ ಕಿತ್ತಿಡುವ ಮೊದಲು
ಎದುರಿಗೆ ಬಂದ ಮಾನವೇತರ ಜೀವಿಗಳ ಕಂಡು
ಮುಗುಳ್ನಗುವೊಂದು ಮೊಗದಲಿ ಮೂಡಿತು
ಮಾನವನ ಸ್ವಾರ್ಥಕ್ಕೆ ಬಲಿಯಾಗಿ
ಕುಡಿವ ನೀರಿಗೂ, ತುಂಡು ಭೂಮಿಗೂ
ಕನಕದ ಬೆಲೆ ಬಂದಿರುವುದ ನೆನೆದು
ಖೇದಗೊಂಡ ಜೀವವೊಂದು
ಯಾವುದೋ ಒಂದು ಮೂಲೆಯಲ್ಲಿ ಕುಳಿತುಕೊಂಡು
ಮುಂಬರಲಿರುವ ಜೀವಗಳ ನೆನೆಯಿತು
ಮಣ್ಣಿಗಾಗಿ ಹೊಡೆದಾಟ ಕಂಡ ನಮಗೆ
ನೀರಿಗಾಗಿ ಹೊಡೆದಾಡುವ ಕಾಲವಿನ್ನು
ದೂರವಿಲ್ಲವೆಂಬುದರ ಅರಿವಾಗಿ
ಸಿದ್ದತೆಯ ರೂಪಿಸುವದರಲ್ಲಿ
ಬುದ್ಧಿ ತೊಡಗಬೇಕೆನ್ನುವಾಗ
ಭವಿಷ್ಯದ ಕರಾಳತೆ ಬೆಚ್ಚಿ ಬೀಳಿಸಿತು!!!
-ಭಾರತೀಯ
ಪ್ರಸನ್ನ. ಆರ್. ಹೆಗಡೆ
ತಂಪು ತಂಗಾಳಿ ತಿಳಿಯಾಗಿ ಬೀಸುವಾಗ
ತುಂಬು ಚಂದಿರನ ನೋಡಿಕೊಂಡು
ಮೆತ್ತನೆಯ ಹುಲ್ಲು ಹಾಸಿನ ಮೇಲೆ
ಬರಿಗಾಲಲ್ಲಿ ನಡೆಯೋಣವೆಂದುಕೊಂಡು
ಭೂಮಾತೆಯ ಮೇಲೆ ಹೆಜ್ಜೆಯೂರಿದಾಗ
ಕಾಲಿಗೆ ತಂಪು ಸೂಸಿ ಮನಸು ಮಗುವಾಯಿತು
ಇಬ್ಬನಿಯೊಂದು ಮೇಲಿಂದ ಇಳಿದು
ಇನಿಯನಂತೆ ನನ್ನ ತಬ್ಬಿ
ಮಂಜು ಮುಸುಕುವ ಸಮಯದಲ್ಲಿ
ಕಚಗುಳಿಯ ಭಾವ ನೀಡಿ
ಎಲ್ಲೋ ಕರೆದುಕೊಂಡು ಹೋಗುವಾಗ
ಸ್ವರ್ಗವೇ ಬೇಡವೆನಿಸಿತು
ಬಾಗಿ ಬಳುಕುವ ಬಳ್ಳಿಯೊಂದು
ಮೆಲ್ಲ ನನ್ನ ಕಡೆಗೆ ಬಂದು
ಮುತ್ತು ನೀಡುವಂತೆ ತಾಗಿ
ತಿಳಿಯಾದುದೊಂದು ಸ್ಪರ್ಶ ನೀಡಿ
ತಿರುಗಿ ತಾ ಹೊರಟಾಗ
ನಲ್ಲೆಯ ನೆನಪು ಮಾಸಿತು
ಪ್ರಕೃತಿ ತನ್ನ ಸೌಂದರ್ಯವನ್ನೆಲ್ಲ
ನನಗಾಗಿ ಪ್ರದರ್ಶನಕ್ಕಿಟ್ಟಂತೆ ಮನವು ಬಗೆದು
ತನುವು ಗಾಳಿಯಲ್ಲಿ ತೇಲಾಡಿ
ಉಲ್ಲಾಸ ಎದೆಯ ತುಂಬೆಲ್ಲಾ ತುಳುಕಾಡಿ
ಖುಷಿಯೆಂದರೆನೆಂದು ಅರಿವಾಗಿ
ರಾತ್ರಿ ರೋಮಾಂಚನವಾಯಿತು
ಹೊರಗಣ ತಂಪು
ಒಳಗಿನ ಕಾವ ತಣಿಸುವ ಪರಿನೋಡಿ
ನಿಸರ್ಗದ ಜಾಣ್ಮೆಗೆ ತಲೆದೂಗಬೇಕೆನಿಸಿ
ಮುಂದೆ ಹೆಜ್ಜೆ ಕಿತ್ತಿಡುವ ಮೊದಲು
ಎದುರಿಗೆ ಬಂದ ಮಾನವೇತರ ಜೀವಿಗಳ ಕಂಡು
ಮುಗುಳ್ನಗುವೊಂದು ಮೊಗದಲಿ ಮೂಡಿತು
ಮಾನವನ ಸ್ವಾರ್ಥಕ್ಕೆ ಬಲಿಯಾಗಿ
ಕುಡಿವ ನೀರಿಗೂ, ತುಂಡು ಭೂಮಿಗೂ
ಕನಕದ ಬೆಲೆ ಬಂದಿರುವುದ ನೆನೆದು
ಖೇದಗೊಂಡ ಜೀವವೊಂದು
ಯಾವುದೋ ಒಂದು ಮೂಲೆಯಲ್ಲಿ ಕುಳಿತುಕೊಂಡು
ಮುಂಬರಲಿರುವ ಜೀವಗಳ ನೆನೆಯಿತು
ಮಣ್ಣಿಗಾಗಿ ಹೊಡೆದಾಟ ಕಂಡ ನಮಗೆ
ನೀರಿಗಾಗಿ ಹೊಡೆದಾಡುವ ಕಾಲವಿನ್ನು
ದೂರವಿಲ್ಲವೆಂಬುದರ ಅರಿವಾಗಿ
ಸಿದ್ದತೆಯ ರೂಪಿಸುವದರಲ್ಲಿ
ಬುದ್ಧಿ ತೊಡಗಬೇಕೆನ್ನುವಾಗ
ಭವಿಷ್ಯದ ಕರಾಳತೆ ಬೆಚ್ಚಿ ಬೀಳಿಸಿತು!!!
-ಭಾರತೀಯ
ಪ್ರಸನ್ನ. ಆರ್. ಹೆಗಡೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ