Popular Posts
-
ಮತ್ಸ್ಯಯಂತ್ರವ ಭೇದಿಸಿ ವರಿಸುವವನಿಗೆ ಕಾದಿದ್ದಳು ಹಿಡಿದು ಹೂಮಾಲೆಯ ಕೈಯಲ್ಲಿ ಅವಳು ಕೃಷ್ಣೆ ನಾಮಾಂಕಿತೆ ಆಕೆ, ಕೃಷ್ಣವರ್ಣದ ಸುಂದರಿ ಕೃಷ್ಣನ ಮಾನಸ ಸೋದರಿ, ಪಾಂಚಾಲ...
-
ಮುರಳಿಯ ಮಧುರ ಗಾನಕೆ ಮನಸೋತಳಾ ಬಾಲಿಕೆ ನಿಂತು ತಾ ದೂರದೆ ಕೃಷ್ಣನ ಕಂಡಳೋ ರಾಧೆ ಸುತ್ತಲೂ ಗೋಪಿಕಾ ಸ್ತ್ರೀಯರು ದೇವನ ಜೊತೆಗೂಡಿರಲು ನಿರ್ಮಲ ಭಾವದಿಂದಲೆ ...
-
ಹೇಳಬೇಕೆಂದುಕೊಂಡೆ ಗೆಳತಿ ಆಗಲಿಲ್ಲ... ಏಕೆಂದರೆ ನಿನ್ನ ನಾ ಅರಿಯಬೇಕಾದರೆ ಜೊತೆ ಜೊತೆಗೆ ಹೆಜ್ಜೆ ಹಾಕಬೇಕು ಮನಸು ಬಿಚ್ಚಿ ಮಾತಾಡಬೇಕು ದಾರಿಯಲಿ ...
-
ಸ್ಟೀವ್ ಜಾಬ್ಸ್ ಅಗಾಧ ಸಂಪತ್ತು ಮನೆಯಲಿ ತುಂಬಿರಲು ಸುಖವಾಗಿ ಉಂಡಾಡಿ ತಿರುಗಾಡುವುದ ಬಿಟ್ಟು ಕ್ರೀಯಾಶೀಲತೆಯ ಹಿಂದೆ ಬಿದ್ದವನ ಬದುಕಿನತ್ತ ಒಮ್ಮೆ ಕಣ್ಣನರಳಿಸಿದಾಗ ಕಣ್...
-
"ಚೆನ್ನಾಗಿರು" ತಂಗಾಳಿಯಂತೆ ತಿಳಿಯಾಗಿ ಬಂದು ಮಿಂಚಂತೆ ಮಾಯವಾದವಳ ಮನದೊಳಗೆ ಮರು ಮರುಗಿ ಮರಳಿ ಹುಡುಕಲೇನು? ಬಿನ್ನವಿಸಲು ಬಾಯೇ ಬರಲಿಲ್ಲವಲ್ಲ ಎಂದ...
-
ನೂರು ದನಿಗಳು ಸುತ್ತ ಸೇರಿ ಕೇಕೆ ಹಾಕುತ್ತಿವೆ ತಾಳಿಕೊ, ಕೇಳಿಸಿಕೊ ನಿನಗೆ ಬೇಕಾದ್ದನ್ನು ಕಿತ್ತೊಗೆ ನಿನಗೆ ಬೇಡವಾದದ್ದನ್ನು ಉತ್ತೇಜಿಸಿಕೊ ಮನವೇ ನಿನ್ನ ...
-
ವಿಶೇಷವೇನಿಲ್ಲ, ಎರಡೇ ಟೈಯರ್ರು ಹಳೇ ಹರಕ್ಯುಲಸ್ ಮಾಡೆಲ್ಲು ಕಾಲಕಾಲಕ್ಕೂ ಎಣ್ಣೆ ಬಿಟ್ಟು ಈಗಲೂ ಚೆನ್ನಾಗಿದೆ ಅಪ್ಪಯ್ಯನ ಸೈಕಲ್ಲು ನೌಕರಿಗೆ ಸೇರಿದಾಗ ಮ...
-
ನಕ್ಕೋತ ಬಂದಳ ಆಕಿ ನಕ್ಕೋತ ಬಂದಳ ಆಕಿ ಮುಂಗುರುಳ ಗಾಳಿಗೆ ತೇಲಿ ಆ ಸೊಂಟ ತುಸುವಾಗಿ ಬಳುಕಿ ನಕ್ಕೋತ ಬಂದಳ ಆಕಿ ರವಿಯೆದ್ದ ಮುಂಜಾನೆಯಾಗ ಮಂಜಿನ್ನು ಹಾರದಿರುವಾಗ ಆ...
-
ಹೊತ್ತಾಯಿತು ಸ್ವಾಮಿ, ಸಮಯ ಹೋಗಿದ್ದೆ ತಿಳಿಯಲಿಲ್ಲ! ಚಳಿಯಲ್ಲಿ ಬೆಚ್ಚನೆ ಹೊದ್ದು ಮಲಗಿದರೆ ಕಾಲ ಕಳೆದದ್ದು ಗೊತ್ತಾಗುವುದೇ? ಗೊತ್ತಾಗಿ ಆಯಿತಲ್ಲ? ಇನ್ನೇನು ಮಾಡುವುದ...
-
ಮುಸ್ಸಂಜೆ ಮಳೆ ಮುಸ್ಸಂಜೆ ಮಳೆಯ ಮಾರ್ಧವದಿ ಮುಗ್ಧ ಮನ ಮಗುವಾಗಿದೆ ಎಲ್ಲೋ ಬಿದ್ದು ಮುತ್ತಾಗಬೇಕಿದ್ದ ಹನಿ ನನ್ನ ಮೇಲೆರಗಿ ತಂಪೆರೆದಿದೆ ನಾಚಿ ಕೆಂಪಾದ ಸೂರ್ಯನೂ ಮಾಯ ಬರಲಾ...
Blog Archive
ಒಟ್ಟು ಪುಟವೀಕ್ಷಣೆಗಳು
Blogger ನಿಂದ ಸಾಮರ್ಥ್ಯಹೊಂದಿದೆ.
ನನ್ನ ಬಗ್ಗೆ
- ಭಾರತೀಯ
- ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?
ಬೆಂಬಲಿಗರು
ಈ ಬ್ಲಾಗ್ ಅನ್ನು ಹುಡುಕಿ
ಮಂಗಳವಾರ, ಜನವರಿ 10, 2012
ಉದ್ಯೋಗವನರಸಿ ಇಲ್ಲಿ
ಧ್ವನಿಯೊಂದು ಕೇಳಿಬಂದಿತು
ಸಮಾಧಾನ ಸಾಲಿನಲ್ಲಿ ನಿಲ್ಲಿ!
ಸುತ್ತಲೂ ಕಂಡೆ ನೂರಾರು ಮಂದಿ
ಎಲ್ಲರೂ ನನ್ನಂತೆ ಪದವೀಧರರು
ಕೆಲಸ ಸಿಗದೇ ಇರುವವರು
ಕಾದು ಕಾದೂ ಸಾಕಾಗಿರುವವರು
ಹೆಸರೊಂದು ತೂರಿಬಂತು ಗಾಳಿಯಲ್ಲಿ
ಅಭಿನಂದನೆ, ಚಪ್ಪಾಳೆ!
ನಂತರ ಮತ್ತೊಂದೆರಡು! ಚಪ್ಪಾಳೆ,
ಪಟ್ಟಿ ಮುಗಿಯಿತು ನನ್ನ ಹೆಸರಿಲ್ಲ ಅಲ್ಲಿ!
ಮನದೊಳಗಿನ ಮೂಕವೇದನೆಗೆ ಮಾತು ಬಾರದೆ
ಮಂದಹಾಸವೊಂದು ಮೊಗದಲಿ ಮೂಡಿ
ಕಣ್ಣಂಚಲಿ ಮಡುಗಟ್ಟಿದ ಕಣ್ಣೀರು
ಕೆನ್ನೆ ದಾಟಿ ನೆಲ ಸೇರಿತು
ಗೆದ್ದವಗೆ ಹೇಳಿ ಶುಭಾಷಯ
ಸೋತವಗೆ ಹೇಳಿ ಸಮಾಧಾನ
ನನ್ನಂತೆ ಬಹಳ ಜನರಿರುವುದ ಕಂಡು
ನಿಟ್ಟುಸಿರೊಂದು ಹೊರಬಂದಿತು
ಕೆಲಸ ನೀಡದ ವಿದ್ಯೆ
ಅರೆಬೆಂದ ಪದವೀಧರರ
ಹುಟ್ಟುಹಾಕುತ್ತಿರುವ ಈ ಸಮಾಜ
ರೋಸಿದ ಮನ ವ್ಯವಸ್ಥೆಯ ದೂಷಿಸಿತು
ವಿದ್ಯೆಯಾಯಿತು ಉದ್ಯಮ
ಸರಸ್ವತಿಯ ಹೆಸರ ಮುಂದಿಟ್ಟುಕೊಂಡು
ಲಕ್ಷ್ಮಿಯ ಆರಾಧನೆ ನಿರಂತರ
ಉಳಿದದ್ದೆಲ್ಲ ಅನಂತರ
ಜಗತ್ತಿನ ಜನಸಂಖ್ಯೆ ದಾಟಿತು ಏಳು ಶತಕೋಟಿ
ಬದುಕಬೇಕು,ಬದುಕಲು ಕಾಸು ಬೇಕು !
ಕಾಸು ಗಳಿಸಲು ಕೆಲಸ ಬೇಕು
ಅದನ್ನು ಎಲ್ಲಿ ಹುಡುಕಬೇಕು?
"ನಾವಿದ್ದೇವೆ ಬನ್ನಿ, ಕೆಲಸ ಕೊಡಿಸುತ್ತೇವೆ"
ಎಂಬ ಅಸಂಖ್ಯಾತ ಏಜೆನ್ಸಿಗಳು
ಮೊದಲು ದುಡ್ಡು ಕೊಡಿ ಎಂದು ಕೈಚಾಚುವಾಗ
ಹರಿದ ಜೇಬು ಕಿಸಕ್ಕನೆ ನಕ್ಕಿತು!
ಅಯ್ಯೋ ಇನ್ನೂ ಕೆಲಸ ಸಿಗಲಿಲ್ಲವೆ?
ಅದವನ ಹಣೆಯಲ್ಲಿ ಬರೆದಿಲ್ಲ ಬಿಡು
ಪಾಪ ಹೀಗಾಗಬಾರದಿತ್ತು
ಎಂಬೆಲ್ಲ ಪದಗಳ ಕೇಳಿ ಕಿವಿ ಕಿವುಡಾಗಿದೆ
ಈ ಸಮಾಜ, ಹೊಲಸು ರಾಜಕೀಯ
ಸ್ಪರ್ಧಾತ್ಮಕತೆಯ ಸೋಗುಹಾಕಿಕೊಂಡ
ಉದ್ಯಮ ಪ್ರಪಂಚವ ನೋಡುತ್ತಾ
ಅಡ್ಡ ದಾರಿ ಹಿಡಿಯದೆ, ನಾನಿನ್ನೂ ಕಾಯುತ್ತೇನೆ
ಎಂದೋ ಸಿಗಲಿರುವ ಒಂದು ಕೆಲಸಕ್ಕೆ!
-ಭಾರತೀಯ
ಪ್ರಸನ್ನ ಆರ್ ಹೆಗಡೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
2 ಕಾಮೆಂಟ್(ಗಳು):
Very good one!!!
Thank you !!!!
ಕಾಮೆಂಟ್ ಪೋಸ್ಟ್ ಮಾಡಿ